`ಭ್ರಷ್ಟಾಚಾರ` - ಶೋಭಾ - ಯಡ್ಡಿ ಅಣುಕು
Posted date: 12 Wed, Oct 2011 ? 12:18:20 PM

ಇಂದಿನ ಅತಿ ಹೆಚ್ಚು ಚರ್ಚೆಗೊಳಗಾಗಿರುವ ವಿಚಾರ ಎಂದರೆ ’ಭ್ರಷ್ಟಾಚಾರ’.  ಈ ಚಿತ್ರದಲ್ಲಿ ನಿರ್ದೇಶಕ ಸಾಯಿಪ್ರಕಾಶ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಇಂಧನ ಮಂತ್ರಿ ಶೋಭಾ ಕರಂದ್ಲಾಜೆ ಅವರನ್ನು ಹೋಲುವಂತಹ ಎರಡು ವ್ಯಕ್ತಿಗಳನ್ನು ಚಿತ್ರಕ್ಕಾಗಿ ಪರಿಚಯಿಸಲಿದ್ದಾರೆ. ಅದೇ ಅಲ್ಲದೆ ಹೈದರಾಬಾದಿನ ಕೆಲವು ಸ್ಥಳಗಳಲ್ಲಿ ಗಣಿ ಬಗ್ಗೆ ಎದ್ದಿರುವ ಧ್ವನಿಯನ್ನು ನಿರ್ದೇಶಕರು ಪ್ರಸ್ತಾಪಿಸಲಿದ್ದಾರೆ.

ನಿರ್ಮಾಪಕ ನರ್ಗೀಸ್ ಬಾಬು ಅವರ ಪುತ್ರ ಕಮ್ಮರ್ ಹೆಸರಿನಲ್ಲಿ ರೆಹಾನ್ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ತಯಾರಿಸುತ್ತಿರುವ ಈ ಚಿತ್ರ ಮನಸ್ಸಿನ ಆಂತರ್ಯದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಹೊರಹಾಕಲಿದೆ. ಪ್ರಜ್ಞೆ ಹುಟ್ಟಿಸುವುದರ ಜೊತೆಗೆ ಭಯ ಮೂಡಿಸುವ ಕೆಲಸವು ಆಗಬೇಕು ಎಂಬುದು ಈ ಚಿತ್ರದ ಆಶಯ. ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿದಿದ್ದು ಇನ್ನು ಕೆಲವು ಭಾಗದ ಚಿತ್ರೀಕರಣ ಅಷ್ಟೇ ಉಳಿದಿದೆ.

ಕಿಶೋರ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಆದಿ ಲೋಕೇಶ್ ಹಾಗೂ ಇನ್ನಿತರರು ತಾರಾಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed